ರಿಶಿ ಯುನಿವರ್ಸಲ್ ಮೂವೀಸ್ ಲಾಂಛನದಲ್ಲಿ ಮಧುರಿಶಿ ಅವರು ನಿರ್ಮಿಸುತ್ತಿರುವ ‘ಕಲಿಕುಮಾರ್, ಕಲಿನಾಗ್, ಕಲಿವರ್ಧನ’ ಚಿತ್ರ ಕಳೆದವಾರ ರೇಸ್ಕೋರ್ಸ್ನಲ್ಲಿ ಆರಂಭವಾಯಿತು.
ನಾಯಕ ಚಿರಂಜೀವಿ ಸರ್ಜಾ ಕರ್ನಾಟಕಕ್ಕೆ ನಾನೊಬ್ಬನೆ ಸ್ಟಾರ್ ಎಂದು ಹೇಳುವ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಮುನಿರತ್ನ ಆರಂಭ ಫಲಕ ತೋರಿದರು. ಕಿಚ್ಚ ಸುದೀಪ್ ಕ್ಯಾಮೆರಾ ಚಾಲನೆ ಮಾಡಿದರು.
ಕ್ಯಾಪ್ಟನ್ ಶ್ರೀವತ್ಸ ಎಸ್.ಎನ್.ರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಕೆಳಗೂರು ಟೀ ಎಸ್ಟೆಟ್ನಲ್ಲಿ ಮುವತ್ತೈದು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.
ಐದು ಹಾಡುಗಳಿರುವ ಈ ಚಿತ್ರಕ್ಕೆ ಶಕ್ತಿಭೂಷಣ್ ಸಂಗೀತ ನೀಡುತ್ತಿದ್ದಾರೆ. ಸಿ.ನಾರಾಯಣ್ ಛಾಯಾಗ್ರಹಣ, ಸಿ.ಮೋಹನ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ಅಂಕಿತಾ, ರಮೇಶ್ಭಟ್, ತಬಲನಾಣಿ, ಬಿ.ಸುರೇಶ್ ಮುಂತಾದವರಿದ್ದಾರೆ.